ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಟಯರ್ ಪಂಕ್ಚರ್ ತೆಗೆಯುತ್ತಿದ್ದಾಗ ಯಮನಂತೆ ಬಂದೆರಗಿದ ಲಾರಿ. ಚಾಲಕ‌ ದುರ್ಮರಣ.

ಟಯರ್ ಪಂಕ್ಚರ್ ತೆಗೆಯುತ್ತಿದ್ದಾಗ ಯಮನಂತೆ ಬಂದೆರಗಿದ ಲಾರಿ. ಚಾಲಕ‌ ದುರ್ಮರಣ.

Wed, 28 Dec 2022 05:15:37  Office Staff   SO News

ಕುಮಟಾ : ಲಾರಿಯೊಂದರ ಟಯರ್ ಪಂಕ್ಚರ್ ತೆಗೆಯುತ್ತಿದ್ದಾಗ ಸರಕು ತುಂಬಿದ ಲಾರಿ ಢಿಕ್ಕಿ ಹೊಡೆದ ಪರಿಣಾಮವಾಗಿ ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ.

ಕುಮಟಾ ತಾಲೂಕಿನ ದುಂಡಕುಳಿ ರಾ. ಹೆದ್ದಾರಿ ಬಳಿ ಈ ಅಪಘಾತ ಸಂಭವಿಸಿದೆ.

ಉತ್ತರ ಪ್ರದೇಶ ಮೂಲದ ಶಕೀಲ್ ಅಹಮದ್ (42)ಮೃತ ದುರ್ದೈವಿ.

ಹೆದ್ದಾರಿ ಪಕ್ಕದಲ್ಲಿ ಪಂಕ್ಚರ್ ಆಗಿದ್ದರಿಂದ ಲಾರಿ ನಿಂತಿತ್ತು. ಚಾಲಕ ಶಕೀಲ್ ಕೆಳಗಿದ್ದು ಪಂಕ್ಚರ್ ತೆಗೆಯುತ್ತಿದ್ದ ಈ ವೇಳೆ ಸರಕು ತುಂಬಿದ ಲಾರಿ ಢಿಕ್ಕಿ ಹೊಡೆದಿದ್ದರಿಂದ  ಚಾಲಕನ ದೇಹ ಛಿದ್ರಗೊಂಡಿದೆ.  ಕುಮಟಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: