ಮಂಜೇಶ್ವರ, ನವೆಂಬರ್ ೨೩:ಕೇರಳದ ಪಾಲಕ್ಕಾಡ್ ನಿಂದ ಪರಾರಿಯಾಗಿದ್ದಾರೆ ಎನ್ನಲಾದ ಇಬ್ಬರು ವಿಧ್ಯಾರ್ಥಿನಿಯರನ್ನು ಕುಂಬಳೆ ಪೊಲೀಸರು ಸೆರೆ ಹಿಡಿದಿರುತ್ತಾರೆ.
೧೦ ನೇ ತರಗತಿ ವಿಧ್ಯಾರ್ಥಿನಿಯರಾದ ಇಬ್ಬರನ್ನು ಇವರು ಮಂಗಳೂರಿಗೆ ಪಲಾಯನ ಗೈಯಲು ಯತ್ನಿಸುತ್ತಿರುವ ಮಧ್ಯೆ ಇವರನ್ನು ಸೆರೆ ಹಿಡಿಯಲಾಗಿದೆ.ಈ ವಿಧ್ಯಾರ್ಥಿನಿಯರಲ್ಲಿ ಒಬ್ಬಳೀಗೆ ಯುವಕನೋರ್ವನಲ್ಲಿ ಪ್ರೇಮ ದಿಂದಿದ್ದು ಕಳೆದ ಕೆಲವು ದಿನಗಳಿಂದ ಈ ಪ್ರೇಮಿಗಳೊಳಗೆ ವಿರಸ ಉಂಟಾಗಿ ವಿಧ್ಯಾರ್ಥಿನಿಗೆ ಇದರಿಂದ ಮನಸ್ಥಾಪ ಉಂಟಾಗಿ ಇದರ ಮಧ್ಯೆ ಮಂಗಳೂರಿನ ವಿಧ್ಯಾರ್ಥಿಯೋರ್ವ ಇವಳೀಗೆ ಸಮಾಧಾನ ಹೇಳಿ ಮಂಗಳೂರಿಗೆ ಬರಲು ಆಹ್ವಾನ ವಿತ್ತಿದ್ದ ಎನ್ನಲಾಗಿದೆ. ಅದೇ ರೀತಿ ಈ ವಿಧ್ಯಾರ್ಥಿಯ ಜತೆಗೆ ಸಿಕ್ಕಿ ಬಿದ್ದ ಇನ್ನೋರ್ವ ವಿಧ್ಯಾರ್ಥಿನಿಗೆ ಪರೀಕ್ಷೆಯಲ್ಲಿ ಅಂಕ ಕಡಿಮೆಯಾಗಿದ್ದು ಇದರಿಂದಾಗಿ ತಂದೆಯಿಂದ ಮುನಿಸಿ ಇಬ್ಬರೂ ಕೂಡಾ ಮಂಗಳೂರಿಗೆ ತಲುಪುವ ಉದ್ದೇಶದಿಂದ ಪಾಲಕ್ಕಾಡ್ ನಿಂದ ಮಂಗಳೂರಿಗೆ ಹೊರಟಿದ್ದರೆನ್ನಲಾಗಿದೆ. ಇವರನ್ನು ಬರಮಾಡಲು ಆಹ್ವಾನವಿತ್ತ ವಿಧ್ಯಾರ್ಥಿ ವಿಧ್ಯಾರ್ಥಿಗಳ ಸಮಸ್ಯೆಯನ್ನು ಪರಿಹರಿಸಿ ಕೊಡುವುದಾಗಿ ಭರವಸೆಯನ್ನಿತ್ತಿದ್ದ ಹಿನ್ನೆಲೆಯಲ್ಲಿ ಈ ವಿಧ್ಯಾರ್ಥಿನಿಗಳು ಪರಾರಿಯಾಗಲು ಯತ್ನಿಸಿದರೆನ್ನಲಾಗಿದೆ.
ಮನೆಯಲ್ಲಿ ಯಾವೊಂದು ವಿವರವನ್ನೂ ತಿಳಿಸದೆ ಪರಾರಿಯಾಗಲು ಯತ್ನಿಸಿದ ಈ ವಿಧ್ಯಾರ್ಥಿನಿಗಳನ್ನು ಅವರಲ್ಲಿದ್ದ ಮೊಬೈಲ್ ನ ನೆಟ್ ವರ್ಕ್ ನ ರೇಂಜ್ ಗುರುತಿಸಿ ಕೊಯಂಬತ್ತೂರು ಪ್ಯಾಸಂಜರ್ ರೈಲಿನಿಂದ ಕುಂಬಳೆ ಪೊಲೀಸರು ಸೆರೆ ಹಿಡಿದು ಪಾಲಕ್ಕಾಡ್ ನಾರ್ತ್ ಪೊಲೀಸರ ವಶಕ್ಕೆ ಒಪ್ಪಿಸಿರುತ್ತಾರೆಂದು ತಿಳಿದು ಬಂದಿದೆ.ವಿಧ್ಯಾರ್ಥಿನಿಗಳ ಮಾಹಿತಿಯಂತೆ ಮಂಗಳೂರಿನ ರೈಲು ನಿಲ್ದಾನದಿಂದ ವಿಧ್ಯರ್ಥಿಯೋರ್ವನನ್ನು ಬಂಧಿಸಿ ಪಾಲಕ್ಕಾಡ್ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.