ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಂಗಳೂರು: ಹಿರಿಯ ಸಾಹಿತಿ ಅಹ್ಮದ್ ನೂರಿಗೆ ಬ್ಯಾರಿ ಅಕಾಡಮಿಯ ‘ಗೌರವ ಪ್ರಶಸ್ತಿ’ ಪ್ರದಾನ

ಬೆಂಗಳೂರು: ಹಿರಿಯ ಸಾಹಿತಿ ಅಹ್ಮದ್ ನೂರಿಗೆ ಬ್ಯಾರಿ ಅಕಾಡಮಿಯ ‘ಗೌರವ ಪ್ರಶಸ್ತಿ’ ಪ್ರದಾನ

Wed, 21 Apr 2010 02:59:00  Office Staff   S.O. News Service
ಬೆಂಗಳೂರು, ಎ.೨೦: ಹಿರಿಯ ಬ್ಯಾರಿ ವಿದ್ವಾಂಸ, ಸಾಹಿತಿ ಅಹ್ಮದ್ ನೂರಿಗೆ ಬೆಂಗಳೂರಿನ ಜೆ.ಸಿ.ನಗರದ ಅವರ ನಿವಾಸದಲ್ಲಿ ಮಂಗಳವಾರ ಕರ್ನಾಟಕ ಬ್ಯಾರಿ ಅಕಾಡಮಿಯ ೨೦೦೯ನೆ ಸಾಲಿನ ‘ಗೌರವ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

 ಈ ಸಂದರ್ಭ ಅಕಾಡಮಿಯ ತ್ರೈಮಾಸಿಕ ‘ಬೆಲ್ಕಿರಿ’ಯನ್ನು ಬಿಡುಗಡೆಗೊಳಿಸಲಾಯಿತು. 

ಅಕಾಡಮಿಯ ಅಧ್ಯಕ್ಷ ಎಂ.ಬಿ.ಅಬ್ದುಲ್ ರಹ್ಮಾನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗೆಝೆಟೆಡ್ ವ್ಯವಸ್ಥಾಪಕ ಎಸ್.ಎ.ಬಾವಿಕಟ್ಟೆ, ಬ್ಯಾರೀಸ್ ಸಮೂಹ ಸಂಸ್ಥೆಗಳ ಮಾಲಕ ಸೈಯದ್ ಮುಹಮ್ಮದ್ ಬ್ಯಾರಿ, ಮಾಜಿ ಶಿಕ್ಷಣ ಸಚಿವ ಬಿ.ಎ.ಮೊಇದಿನ್, ಬೆಂಗಳೂರು ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್‌ನ ಅಧ್ಯಕ್ಷ ಜಿ.ಎ.ಬಾವಾ, ಅಕಾಡಮಿಯ ಸದಸ್ಯರಾದ ಪಿ.ಮುಹಮ್ಮದ್, ಕುವೆಂಡ ಹಂಝತುಲ್ಲಾ, ಡಾ.ಮಕ್ಸೂದ್ ಅಹ್ಮದ್ ಹಾಗೂ ಅಹ್ಮದ್ ನೂರಿಯ ಕುಟುಂಬಸ್ಥರಾದ ಸಿರಾಜ್, ಉಮರ್ ಫಾರೂಕ್, ಅಮೀರ್, ಮೊದೀನ್  ಮೊದಲಾದವರು ಉಪಸ್ಥಿತರಿದ್ದರು.

Share: