ಬೆಂಗಳೂರು, ಅ.೩೦: ಬಲವಂತದ ಮತಾಂತರ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಹಿಂದೂ ಯುವತಿಯರನ್ನು ಪ್ರೇಮ ಜಾಲಕ್ಕೆ ಸಿಲುಕಿಸಿ ‘ಲವ್ ಜಿಹಾದ್’ ಅಸ್ತ್ರವನ್ನು ಬಳಸಲಾಗುತ್ತಿದ್ದು, ಇದರ ಹಿಂದೆ ‘ಅಲ್ಖಾಯಿದಾ’ ಸಂಘಟನೆಯ ಕೈವಾಡವಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾತ್ತಿದ್ದ ಅವರು, ‘ಲವ್ ಜಿಹಾದ್’ ಎನ್ನುವುದು ಭಯೋತ್ಪಾದನೆಯ ಹೊಸ ರೂಪ ಎಂದರು.
ಆದರೆ ಮತಾಂತರಗೊಂಡಿದ್ದು ಯಾವ ವರ್ಷದಲ್ಲಿ, ಯಾವ ರಿಜಿಸ್ಟರ್ ಆಫಿಸ್ನಲ್ಲಿ ಮದುವೆಯಾಗಿದ್ದಾರೆ, ಹಿಂಸೆ ತಾಳಲಾರದೆ ವಾಪಸ್ ಬಂದವರ್ಯಾರು ಹಾಗೂ ಯಾವ್ಯಾವ ಮದ್ರಸಾಗಳಲ್ಲಿ ಮತಾಂತರಕ್ಕೆ ಆಶ್ರಯ ನೀಡಲಾಗುತ್ತಿದೆ ಎನ್ನುವ ಕುರಿತು ದಾಖಲೆಗಳನ್ನು ನೀಡಲು ಅವರು ವಿಫಲರಾದರು. ‘ವರದಿಗಳು ಬಂದಿವೆ’, ‘ಅಂಕಿ-ಸಂಖ್ಯೆಗಳು ಹೇಳುತ್ತವೆ’, ‘ಸಾಕ್ಷಿ ಸಮೇತ ಪ್ರಕರಣಗಳು ಬೆಳಕಿಗೆ ಬಂದಿವೆ’ ಎನ್ನುವ ಉದ್ದ್ದುದ್ದ ಹೇಳಿಕೆಗಳನ್ನು ಬಿಟ್ಟರೆ ಮುತಾಲಿಕ್ ಬಳಿ ಯಾವ ಅಧಿಕೃತ ದಾಖಲೆಗಳಿರಲಿಲ್ಲ.
ಸಹೋದರಿ ಉಳಿಸಿ ಅಭಿಯಾನ: ‘ಲವ್ ಜಿಹಾದ್’ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಜಾಗೃತಿ ಮೂಡಿಸುವುದಾಗಿ ಹೇಳಿದ ಅವರು, ಸಂಘಟನೆಯ ವತಿಯಿಂದ ಡಿಸೆಂಬರ್ ಮೊದಲ ವಾರದಿಂದ ‘ಸಹೋದರಿ ಉಳಿಸಿ-ದೇಶ ರಕ್ಷಿಸಿ’ ಜಾಗೃತಿ ಹಮ್ಮಿಕೊಳ್ಳಲಾಗಿದೆ ಎಂದರು. ಮಠಾಧೀಶರ ಮಾರ್ಗದರ್ಶನದಲ್ಲಿ, ಹಿಂದು ಪರ ಸಂಘಟನೆಗಳ ಸಹಕಾರದೊಂದಿಗೆ ನಡೆಯುವ ಜಾಗೃತಿ ಅಭಿಯಾನಕ್ಕೆ ೨೫ ಸಾವಿರ ಸಿ.ಡಿ., ೧ ಲಕ್ಷ ಕಿರು ಹೊತ್ತಿಗೆ, ೧೦ ಲಕ್ಷ ಕರ ಪತ್ರ, ೨೫ ಸಾವಿರ ಸ್ಟಿಕ್ಕರ್ಸ್ ಪ್ರಚಾರ ಸಾಮಗ್ರಿಗಳನ್ನು ಬಳಸಿಕೊಳ್ಳಲಾಗುವುದು. ಇದಕ್ಕಾಗಿ ೫ ಸಾವಿರ ಯುವಕರು, ೧ ಸಾವಿರ ಯುವತಿಯರಿಗೆ ತರಬೇತಿ ನೀಡಲಾಗುವುದು ಎಂದು ತಮ್ಮ ದೇಶ ರಕ್ಷಣೆ, ಧರ್ಮ ರಕ್ಷಣೆ ಯೋಜನೆಯನ್ನು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಸೇನೆ ಕಾನೂನು ಸಲಹೆಗಾರ ಸತೀಶ್ಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಗರದ ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾತ್ತಿದ್ದ ಅವರು, ‘ಲವ್ ಜಿಹಾದ್’ ಎನ್ನುವುದು ಭಯೋತ್ಪಾದನೆಯ ಹೊಸ ರೂಪ ಎಂದರು.
ಆದರೆ ಮತಾಂತರಗೊಂಡಿದ್ದು ಯಾವ ವರ್ಷದಲ್ಲಿ, ಯಾವ ರಿಜಿಸ್ಟರ್ ಆಫಿಸ್ನಲ್ಲಿ ಮದುವೆಯಾಗಿದ್ದಾರೆ, ಹಿಂಸೆ ತಾಳಲಾರದೆ ವಾಪಸ್ ಬಂದವರ್ಯಾರು ಹಾಗೂ ಯಾವ್ಯಾವ ಮದ್ರಸಾಗಳಲ್ಲಿ ಮತಾಂತರಕ್ಕೆ ಆಶ್ರಯ ನೀಡಲಾಗುತ್ತಿದೆ ಎನ್ನುವ ಕುರಿತು ದಾಖಲೆಗಳನ್ನು ನೀಡಲು ಅವರು ವಿಫಲರಾದರು. ‘ವರದಿಗಳು ಬಂದಿವೆ’, ‘ಅಂಕಿ-ಸಂಖ್ಯೆಗಳು ಹೇಳುತ್ತವೆ’, ‘ಸಾಕ್ಷಿ ಸಮೇತ ಪ್ರಕರಣಗಳು ಬೆಳಕಿಗೆ ಬಂದಿವೆ’ ಎನ್ನುವ ಉದ್ದ್ದುದ್ದ ಹೇಳಿಕೆಗಳನ್ನು ಬಿಟ್ಟರೆ ಮುತಾಲಿಕ್ ಬಳಿ ಯಾವ ಅಧಿಕೃತ ದಾಖಲೆಗಳಿರಲಿಲ್ಲ.
ಸಹೋದರಿ ಉಳಿಸಿ ಅಭಿಯಾನ: ‘ಲವ್ ಜಿಹಾದ್’ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಜಾಗೃತಿ ಮೂಡಿಸುವುದಾಗಿ ಹೇಳಿದ ಅವರು, ಸಂಘಟನೆಯ ವತಿಯಿಂದ ಡಿಸೆಂಬರ್ ಮೊದಲ ವಾರದಿಂದ ‘ಸಹೋದರಿ ಉಳಿಸಿ-ದೇಶ ರಕ್ಷಿಸಿ’ ಜಾಗೃತಿ ಹಮ್ಮಿಕೊಳ್ಳಲಾಗಿದೆ ಎಂದರು. ಮಠಾಧೀಶರ ಮಾರ್ಗದರ್ಶನದಲ್ಲಿ, ಹಿಂದು ಪರ ಸಂಘಟನೆಗಳ ಸಹಕಾರದೊಂದಿಗೆ ನಡೆಯುವ ಜಾಗೃತಿ ಅಭಿಯಾನಕ್ಕೆ ೨೫ ಸಾವಿರ ಸಿ.ಡಿ., ೧ ಲಕ್ಷ ಕಿರು ಹೊತ್ತಿಗೆ, ೧೦ ಲಕ್ಷ ಕರ ಪತ್ರ, ೨೫ ಸಾವಿರ ಸ್ಟಿಕ್ಕರ್ಸ್ ಪ್ರಚಾರ ಸಾಮಗ್ರಿಗಳನ್ನು ಬಳಸಿಕೊಳ್ಳಲಾಗುವುದು. ಇದಕ್ಕಾಗಿ ೫ ಸಾವಿರ ಯುವಕರು, ೧ ಸಾವಿರ ಯುವತಿಯರಿಗೆ ತರಬೇತಿ ನೀಡಲಾಗುವುದು ಎಂದು ತಮ್ಮ ದೇಶ ರಕ್ಷಣೆ, ಧರ್ಮ ರಕ್ಷಣೆ ಯೋಜನೆಯನ್ನು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಸೇನೆ ಕಾನೂನು ಸಲಹೆಗಾರ ಸತೀಶ್ಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.