ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ:ಅಕ್ಷ ಕಟ್ಟಲು ಬಾರದಿದ್ದರೆ ಹೊರಗೆ ಹೋಗಿ: ಜೆ.ಡಿ.ನಾಯ್ಕ

ಭಟ್ಕಳ:ಅಕ್ಷ ಕಟ್ಟಲು ಬಾರದಿದ್ದರೆ ಹೊರಗೆ ಹೋಗಿ: ಜೆ.ಡಿ.ನಾಯ್ಕ

Sun, 01 Nov 2009 02:41:00  Office Staff   S.O. News Service
ಭಟ್ಕಳ, ಅಕ್ಟೋಬರ್ ೩೧ : ಪಕ್ಷ ಕಟ್ಟಲು ಬಾರದೇ ಕೇವಲ ಚುನಾವಣೆಯ ಸಮಯಕ್ಕೆ ಬಂದು ಹೋಗುವವರು ನಮಗೆ ಬೇಡ. ಅವರಾಗಿಯೇ ಪಕ್ಷದಿಂದ ನಿರ್ಗಮಿಸಲಿ ಎಂದು ಶಾಸಕ ಜೆ.ಡಿ.ನಾಯ್ಕ, ಪಕ್ಷದಲ್ಲಿರುವ ತಮ್ಮ ವಿರೋಧಿಗಳ ವಿರುದ್ಧ ಗುಡುಗಿದ್ದಾರೆ.

ಇಂದಿರಾ ಗಾಂಧಿ ಪುಣ್ಯತಿಥಿ ಕಾರ್ಯಕ್ರಮದ ಸಂದರ್ಭದಲ್ಲಿ ಕೆಲವೇ ಕೆಲವು ಜನರು ಆಗಮಿಸಿದ್ದನ್ನು ಕಂಡು ಕೋಪೋದ್ರಿಕ್ತರಾದಂತೆ ಕಂಡು ಬಂದ ಅವರು, ವಿರೋಧಿಗಳ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದರು. ಪಕ್ಷದಲ್ಲಿ ಶಿಸ್ತು, ಅಭಿಮಾನ ಮುಖ್ಯ ಎಂದ ಅವರು ಕೇವಲ ಅಧಿಕಾರಕ್ಕಾಗಿ ಅಲ್ಲ. ಗುಂಪುಗಾರಿಕೆ, ಭಿನ್ನಮತ ಪಕ್ಷಕ್ಕೆ ಒಳ್ಳೆಯದಲ್ಲ. ಶಿಸ್ತಿನ ಪಕ್ಷವೆಂದು ಹೇಳಿಕೊಳ್ಳುತ್ತಿದ್ದ ಬಿಜೆಪಿಯ ಬಣ್ಣವೂ ಬಯಲಾಗಿ ಹೋಗಿದೆ ಎಂದು ತಿಳಿಸಿದರು. 


Share: