ಭಟ್ಕಳ, ನವೆಂಬರ್ 28: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಪೂರ್ಣಿಮಾ ಲಾಡ್ಜ್ ನಲ್ಲಿ ವಿವಾಹಿತ ಮಹಿಳೆಯೊಂದಿಗೆ ರಾಸಲೀಲೆಯಲ್ಲಿ ತೊಡಗಿಕೊಂಡಿದ್ದ ಹಿಂದುಜಾಗರಣಾ ವೇದಿಕೆಯ ಉತ್ತರಪ್ರಾಂತದ ಸಂಚಾಲಕ ಭಟ್ಕಳದ ಗೋವಿಂದಜಟ್ಟಪ್ಪ ನಾಯ್ಕ ಎಂಬಾತನು ಪೋಲಿಸರ ಕೈಗೆ ಸಿಗದೆ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ಶುಕ್ರವಾರ ರಾತ್ರಿ ಜರುಗಿದ್ದು ಆರೋಪಿಯನ್ನು ಹಿಡಿಯುವ ಪ್ರಯತ್ನ ಪೋಲಿಸರಿಂದ ನಡೆಯುತ್ತಿದೆ ಎಂದು ಸಿದ್ದಾಪೂರ ಸಿ.ಪಿ.ಐ ಹಾಲಮೂರ್ತಿ ರಾವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರವಿವಾರದಂದು ರಾತ್ರಿ ಸಿದ್ದಾಪೂರದ ಪೂರ್ಣಿಮಾ ಲಾಡ್ಜನಲ್ಲಿ ವೇಶ್ಯವಾಟಿಕೆ ಧಂದೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯನ್ನು ಪಡೆದ ಸಿದ್ದಾಪೂರ ಪೊಲಿಸರು ಲಾಡ್ಜ್ ಮೇಲೆ ದಾಳಿ ನಡೆಸಿದಾಗ ಕೋಣೆಯ ಬಾಗಿಲನ್ನು ಒಳಗಿಂದ ಭದ್ರವಾಗಿ ಹಾಕಿಕೊಂಡಿದ್ದು ಅದನ್ನು ಒಡೆದು ತರೆಯಲಾಗಿ ಗೋವಿಂದ ನಾಯ್ಕ ಎಂಬಾತನು ಮಹಿಳೆಯೊಂದಿಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು ಕಂಡುಬಂದಿತ್ತು. ಆತನನ್ನು ಹಿಡಿಯಲು ಪ್ರಯತ್ನಿಸಿದ್ದರೂ ಪೋಲಿಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಸ್ಥಳದಲ್ಲಿಯೇ ಇದ್ದ ಮಹಿಳೆಯನ್ನು ಬಂಧಿಸಿ ಬಳಿಕ ಆಕೆಯನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಂಧಿತ ಮಹಿಳೆಯನ್ನು ಭಟ್ಕಳದ ಹನುಮಾನ್ ನಗರದವಳಾದ ಲಲಿತ, (ಗಂಡ ಈರಪ್ಪನಾಯ್ಕ) ಎಂದು ಗುರುತಿಸಲಾಗಿದೆ. ಇವರಿಬ್ಬರ ಮೇಲೆ ಅನೈತಿಕ ಪ್ರಕರಣ ತಡೆ ಕಾಯ್ದೆ ಅನ್ವಯ ಪ್ರಕರಣವನ್ನು ದಾಖಲಾಸಿಲಾಗಿದ್ದು ಆರೋಪಿಯ ಹಡುಕಾಟ ನಡೆದಿದೆ ಎಂದು ಅವರು ತಿಳಿಸಿದರು.
ಸ್ಥಳೀಯರು ಹೇಳುವಂತೆ ಈ ವ್ಯಕ್ತಿಯು ಹಲವಾರು ಬಾರಿ ಇದೇ ಲಾಡ್ಜನಲ್ಲಿ ವೇಶ್ಯವಾಟಿಕೆ ದಂಧೆಯನ್ನು ನಡೆಸುತ್ತಿದ್ದು ಈತನ್ನು ಹಿಡಿಯುವ ಪ್ರಯತ್ನ ಮಾಡಿದಾಗಲೆಲ್ಲ ತಪ್ಪಿಸಿಕೊಂಡು ಪರಾರಿಯಾಗುತ್ತಾನೆ. ಇಂದೂ ಸಹಾ ಈತನು ತನ್ನ ರಾಸಲೀಲೆಯನ್ನು ನಡೆಸಲು ಕೋಣೆಯ ಬಾಗಿಲು ಹಾಕಿಕೊಂಡಾಗ ನಾವು ಈತನನ್ನು ಹಿಡಿಯಲು ಪ್ರಯತ್ನಿಸಿದೇವು ಆದರೆ ಕಿಟಕಿಯಿಂದ ಹೊರಗೆಡೆ ಪಾರಾರಿಯಾಗಿದ್ದಾನೆ. ಈತನು ಸ್ಥಳದಲ್ಲಿ ನೋಕಿಯ ಮೊಬೈಲ್ ಹ್ಯಾಂಡ್ ಸೆಟ್ಟ್ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಭಟ್ಕಳದ ಹನುಮಾನ್ ನಗರದ ವ್ಯಕ್ತಿಯಾದ ಗೋವಿಂದ ಜಟ್ಟಪ್ಪ ನಾಯ್ಕ ಈತನು ಹಿಂದು ಜಾಗರಣ ವೇದಿಕೆಯ ಉತ್ತರ ಪ್ರಾಂತದ ಸಂಚಾಲಕನಾಗಿದ್ದು ಸಂಘಟನೆ ಮುಂಚೂಣಿ ನಾಯಕನಾಗಿದ್ದಾನೆ. ಶುಕ್ರವಾರದಂದು ಸಿರ್ಸಿಯಲ್ಲಿ ದನಸಾಗಾಟ ಕುರಿತಂತೆ ನಡೆದ ಸಭೆಯೊಂದರಲ್ಲಿ ಭಾಗವಹಿಸಲು ಭಟ್ಕಳದಿಂದ ಸಿರ್ಸಿಗೆ ಹೋಗಿದ್ದು ಸಭೆ ಮುಗಿದ ನಂತರ ತನ್ನದೆ ಕೇರಿಯ ವಿವಾಹಿತ ಮಹಿಳೆ ಲಲಿತ ಈರಪ್ಪ ನಾಯ್ಕ ಎಂಬಾಕೆಯೊಂದಿಗೆ ಶುಕ್ರವಾರ ರಾತ್ರಿ ಸಿದ್ದಾಪುರದ ಲಾಡ್ಜ್ ನಲ್ಲಿ ರಾಸಲಿಲೆಯಲ್ಲಿ ತೊಡಗಿದ್ದಾಗ ಸಿಕ್ಕಿಹಾಕಿಕೊಂಡು ಪೋಲಿಸರಿಂದ ತಪ್ಪಿಸಿಕೊಂಡಿದ್ದಾನೆ. ಪೋಲಿಸರು ಈತನಿಗಾಗಿ ವ್ಯಾಪಕ ಬಲೆಯನ್ನು ಬೀಸಿದ್ದಾರೆ ಎನ್ನಲಾಗಿದೆ.
ತನ್ನ ಪತಿಯಿಂದ ಸಂಭಂಧವನ್ನು ಮುರಿದುಕೊಂಡಿದ್ದ ಲಲಿತ ಎಂಬಾಕೆಯೊಂದಿಗೆ ಗೊವಿಂದ ನಾಯ್ಕ ಬಹಳ ದಿನಗಳಿಂದಲೋ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದ ಎಂಬ ಸುದ್ದಿಯು ಪೋಲಿಸ್ ಮೂಲಗಳಿಂದಲೆ ಬಹಿರಂಗಗೊಂಡಿದೆ.