ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾಮಾಕ್ಷಿ ಪೆಟ್ರೋ ಬಂಕ್‍ನ ಮಾಲೀಕ ಮೋಹನ ಭಟ್ಟ ನಿಧಾನ

ಕಾಮಾಕ್ಷಿ ಪೆಟ್ರೋ ಬಂಕ್‍ನ ಮಾಲೀಕ ಮೋಹನ ಭಟ್ಟ ನಿಧಾನ

Tue, 20 Sep 2022 06:35:25  Office Staff   so news

ಭಟ್ಕಳ: ನಗರದ ಕಾಮಾಕ್ಷಿ ಪೆಟ್ರೋ ಬಂಕ್‍ನ ಮಾಲೀಕರು, ಜನಾನುರಾಗಿಗಳಾಗಿದ್ದ  ಮೋಹನ ಪುರುಶೋತ್ತಮ ಭಟ್ಟ (82) ಇವರು ನಿದನರಾದರು. 
ಮೃತರು ಇಬ್ಬರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.  ಮೂಲತಹ ಹೊನ್ನಾವರ ಮಾವಿನಕುರ್ವಾದವರಾದ ಮೋಹನ ಭಟ್ಟರು ಹೊನ್ನಾವರದ ಮಾವಿನಕುರ್ವಾ ಶ್ರೀ ನವದುರ್ಗಾ ಸಂಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಬಹಳ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 
ಮೃತರ ಅಂತಿಮ ದರ್ಶನವನ್ನು ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿದ ಜೆ. ನಾಯ್ಕ, ಪುಷ್ಪಲತಾ ಮಂಕಾಳ ವೈದ್ಯ, ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ನಾಯಕ, ಟ್ರಸ್ಟಿ ಮೆನೇಜರ್ ರಾಜೇಶ ನಾಯಕ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದರು. 
ಮೃತ ಮೋಹನ ಭಟ್ಟ ಅವರು ಓರ್ವ ಸಮಾಜ ಮುಖಿ ವ್ಯಕ್ತಿಯಾಗಿದ್ದು ಧಾರ್ಮಿಕ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿದ್ದಾರೆ ಎಂದು ಸಮಾಜ ಸೇವಕ ಸುರೇಂದ್ರ ಶ್ಯಾನಭಾಗ, ಮಾಜಿ ಶಾಸಕ ಮಂಕಾಳ ವೈದ್ಯ ಸಂತಾಪ ಸೂಚಿಸಿದ್ದಾರೆ.


Share: