ಭಟ್ಕಳ, ಅಕ್ಟೋಬರ್ 31: ಆಹಾರ ಧಾನ್ಯ,ತರಕಾರಿ ಸೇರಿದಂತೆ ದೈನಂದಿನ ಜೀವನಾವಶ್ಯಕ ವಸ್ತುಗಳ ಬೆಲೆಯು ಗಗನಕ್ಕೇರಿದ್ದು ಸಾಮಾನ್ಯ ಜನರ ಬದುಕು ದುಸ್ತರವಾಗಿದೆ. ಈ ನಿಟ್ಟಿನಲ್ಲಿ ಅಹಾರ ಧಾನ್ಯಗಳ ಬೆಲೆಗಳನ್ನು ನಿಯಂತ್ರಿಸಬೇಕು ಹಾಗೂ ಕೂಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಿ.ಐ.ಟಿ.ಯು ಭಟ್ಕಳ ಶಾಖೆಯು ಕೇಂದ್ರ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದೆ.
ದೇಶದಲ್ಲಿ ಉಂಟಾದ ಆರ್ಥಿಕ ಹಿಂಜರಿತನದಿಂದಾಗಿ ಉದ್ಯೋಗ ಕಡಿತ ಮುಂದುವರಿದಿದ್ದು ಲಕ್ಷಾಂತರ ಜನರ ಬೀದಿಪಾಲಾಗಿದ್ದಾರೆ ಕನಿಷ್ಟ ವೇತನ, ಉದ್ಯೋಗ ಭದ್ರತೆ, ಕೆಲಸದ ಸ್ಥಳದಲ್ಲಿ ಸುರಕ್ಷತೆ , ಸರಕಾರ ಎಲ್ಲ ಸ್ತರದ ಜನರಿಗೂ ಕಡಿಮೆ ದರದಲ್ಲಿ ಪಡಿತರ ಚೀಟಿಯ ಮೂಲಕ ಆಹಾರ ಧಾನ್ಯವನ್ನು ವಿತರಿಸಬೇಕು ಎಂದು ಸಹಾಯಕ ಕಮಿನಷರ್ ಗೆ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸಿ.ಐ.ಟಿ.ಯು ಜಿಲ್ಲಾ ಮುಖಂಡ ಸುಬಾಸ್ ಕೊಪ್ಪಿಕರ್, ಅಂಗನವಾಡಿ ನೌಕರರ ಸಂಘದ ಪುಷ್ಪ ನಾಯ್ಕ, ಸುಧಾ ಭಟ್, ಅಕ್ಷರ ದಾಸೋಹ ಸಂಘದ ಗೀತಾ ನಾಯ್ಕ, ಗುಲಾಬಿ ನಾಯ್ಕ, ಗ್ರಾ.ಪಂ ನೌಕರರ ಸಂಘದ ಲೋಕೇಶ್ ಗೊಂಡ ವಾಸು ನಾಯ್ಕ, ಹಂಚು ಕಾರ್ಮಿಕರ ಸಂಘದ ರಾಮಚಂದ್ರ ನಾಯ್ಕ, ಹರಿಶ್ಛಂದ್ರ ನಾಯ್ಕ, ಹರಿಶ್ಚಂದ್ರ ದೇವಾಡಿಗ, ಕಟ್ಟಡ ಕಾರ್ಮಿಕರ ಸಂಘದ ಪುಂಡಲೀಕ ನಾಯ್ಕ, ಚಂದ್ರು ನಾಯ್ಕ ಮುಂತಾದವರು ಉಪಸ್ಥಿತರಿದ್ದರು.